Posts

ಜೀವನದ ಏಕತಾನತೆಯಿಂದ ಹೊರಬರುವುದು ಹೇಗೆ?

Image
ಚಿಕ್ಕವರಿರುವಾಗ ಬೆಟ್ಟವನ್ನೇ ಕಡಿಯುತ್ತೇನೆ ಎನ್ನುವ ಉತ್ಸಾಹ, ಚೈತನ್ಯ ಒಂದು ವಯಸ್ಸಿಗೆ ಬಂದ ಮೇಲೆ ವಾಸ್ತವದ ಅರಿವಾಗಿ ಜೀವನದ ಜಂಜಾಟವನ್ನು ಎದುರಿಸುವುದರಲ್ಲೇ ಕಳೆಯಲಾರಂಭಿಸುತ್ತೇವೆ. ನಮ್ಮ ಯೋಗ್ಯತೆ, ನಿರೀಕ್ಷೆಗನುಗುಣವಾಗಿ ಉದ್ಯೋಗ ಪಡೆದು ಅದರಲ್ಲೇ ತೃಪ್ತಿ ಹೊಂದಿ,ತಿಂಗಳ ಕೊನೆಯವರೆಗೆ ಮನೆಯ ಖರ್ಚು ವೆಚ್ಚಕ್ಕೆ, ಸ್ವಲ್ಪ ಧೈರ್ಯ ಮಾಡಿ ಸಾಲ ಮಾಡಿದರೆ, ಅದರ ಇಎಂಐ ಗೆ ಸರಿ ಹೊಂದುವಷ್ಟು ಆದಾಯ ಬಂದರೆ ಅಷ್ಟು ಸಾಕು ಅನ್ನುವಷ್ಟರ ಮಟ್ಟಿಗೆ ನಮ್ಮ ಜೀವನ ಸ್ಥಾವರವಾಗುತ್ತದೆ. ಆರಕ್ಕೇರದಿದ್ದರೂ ಮೂರಕ್ಕಿಳಿಯದಿದ್ದರೆ ಸಾಕು ಅನ್ನುವ ಎಚ್ಚರಿಕೆಯಿಂದಲೇ ನೂರಕ್ಕೆ ಎಂಭತ್ತರಷ್ಟು ಜನ ಯಾವುದೇ ಹೊಸ ಸಾಹಸಕ್ಕೆ ಕೈ ಹಾಕದೆ ಇದ್ದುದರಲ್ಲೇ ತೃಪ್ತಿ ಪಟ್ಟುಕೊಳ್ಳುತ್ತೇವೆ. ಅಥವಾ ಹಾಗೆಂದುಕೊಳ್ಳುತ್ತೇವೆ. ಒಂದು ನಿರ್ದಿಷ್ಟ ಗುರಿಯಿಲ್ಲದೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡಿ, ಕೊನೆಗೆ ಹಿಂದಿರುಗಿ ನೋಡಿದಾಗಲೇ ಗೊತ್ತಾಗುವುದು, ಜೀವನ ಎಷ್ಟೊಂದು ರೊಟೀನ್ ಆಗಿದೆಯಲ್ಲ ಎಂದು. ಈ ಏಕತಾನತೆಯ ಜೀವನ ಅದೆಷ್ಟೋ ಜನರಿಗೆ ಅಭ್ಯಾಸವಾಗಿ ಅದರಿಂದ ಹೊರಬರಲೂ ಕೂಡ ಅವರ ಕಂಫರ್ಟ್ ಜೋನ್ ಬಿಡುವುದಿಲ್ಲ. ಜೀವನ ಇಷ್ಟೇ ಅನ್ನುವ ಅಭಿಪ್ರಾಯಕ್ಕೆ ಬಂದುಬಿಟ್ಟು ಬದುಕಿದ್ದಷ್ಟು ದಿನ ದಿನ ದೂಡುವುದೇ ಜೀವನ ಅನ್ನುವ ಮನಸ್ಥಿತಿ ಹಲವರಾಗಿರುತ್ತದೆ. ನಿಮ್ಮದೂ ಅಂಥಹ ಮನಸ್ಥಿತಿ ಆಗಿರದೇ, ಜೀವನದಲ್ಲಿ ಏಕತಾನತೆಯನ್ನು ಅನುಭವಿಸಿ ಅದರಿಂದ ಹೊರಬರಲು ಏನು ಮಾಡಬೇಕು ಎಂದು ತಿಳಿಯಬ...

The Go-Giver ಪುಸ್ತಕ ತಾತ್ಪರ್ಯ

Image
ಪ್ರತಿಯೊಬ್ಬರೂ ಯಶಸ್ಸನ್ನು ಬಯಸುತ್ತಾರೆ. ಯಶಸ್ವಿಯಾಗಬೇಕಾದರೆ ತಾವು ಬಯಸಿದ್ದನ್ನು ಪಡೆಯುವುದರಲ್ಲಿ ತಲ್ಲೀನನಾನಗಬೇಕು ಎನ್ನುವುದು ಸಾಮಾನ್ಯ ತಿಳುವಳಿಕೆ. ತಮ್ಮ ಯಶಸ್ಸಿಗಾಗಿ ಹೇಗಾದರೂ ಸರಿ ಬಯಸ್ಸಿದ್ದೆಲ್ಲವನ್ನೂ ಪಡೆಯಲೇಬೇಕು ಎನ್ನುವ ಧಾವಂತದಲ್ಲಿರುವವರಿಗೆ The Go-Getter ಎಂದು ಸಾಮಾನ್ಯವಾಗಿ ಕರೆಯುತ್ತೇವೆ. ಆದರೆ ಯಶಸ್ವೀ ವ್ಯಕ್ತಿ ಆಗಬೇಕಾದರೆ ಕೇವಲ ಇತರರಿಂದ ಬಯಸುವುದಲ್ಲ. ಅದರ ಬದಲಾಗಿ ಇತರರಿಗಾಗಿ ನಾವು ನಮ್ಮಿಂದಾದ ಕೊಡುಗೆಯನ್ನು ನೀಡುವುದು ಎಂದು The Go-Giver ಪುಸ್ತಕ ಸಾಬೀತುಪಡಿಸುತ್ತದೆ. ಹಾಗಾದರೆ ಕೊಡುವುದರಿಂದ ಹೇಗೆ ನಮಗೆ ಬೇಕಾದುದನ್ನು ಪಡೆಯಬಹುದು ಎನ್ನುವ ಕುತೂಹಲ ಇದ್ದರೆ ಮುಂದೆ ಓದಿ. The Go-Giver ಪುಸ್ತಕದ ಕರ್ತೃಗಳಾದ ಬಾಬ್ ಬರ್ಗ್ ಹಾಗೂ ಜಾನ್ ಡೇವಿಡ್ ಮನ್ ನೀತಿ ಕಥೆಯ ರೂಪದಲ್ಲಿ ಗೆಲುವಿನ ರಹಸ್ಯವನ್ನು ಹೇಳುತ್ತಾರೆ. ಈ ಕಥೆ go-getter ಮನೋಭಾವವನ್ನು ಹೊಂದಿದ್ದ ಜೋ ಎನ್ನುವ ಪಾತ್ರದ ಸುತ್ತ ಹಣೆದಿದೆ. ತನ್ನ ವೃತ್ತಿಯಲ್ಲಿ ಅತ್ಯುನ್ನತ ಸ್ಥಾನವನ್ನು ಹೊಂದುವುದರ ಮೂಲಕ ಸಾಕಷ್ಟು ಸಂಪತ್ತನ್ನು ಗಳಿಸುವ ಗುರಿಯನ್ನು ಹೊಂದಿದ್ದ ಜೋಗೆ ತನ್ನ ಒಬ್ಬ ಕ್ಲೈಂಟ್ ತಪ್ಪಿ ಹೋಗಿದ್ದಕ್ಕೆ ಬಹಳ ನಿರಾಸೆ ಆಗುತ್ತದೆ. ಆಗ ಯಶಸ್ಸಿನ ಪಾಠವನ್ನು ಹೇಳಿಕೊಡುವ ಯಶ್ಸಸ್ವಿ ಉದ್ಯಮಿ ಪಿಂದರ್ ನನ್ನು ತನ್ನ ಹಿರಿಯ ಸಹುದ್ಯೋಗಿಯ ಮುಖಾಂತರ ಭೇಟಿ ಆಗುತ್ತಾನೆ. ಈಗಾಗಲೇ ಸಾಕಷ್ಟು ಹಣವನ್ನು ಸಂಪಾದಿಸಿದ ಪಿಂದರ್ ನನ್ನು ಭೇಟಿ ಆಗುವುದು ...
ಆಕೆಗೆ ಶ್ರೇಯಸ್ಸಾಗಲಿ ಒ೦ದು ವಿದ್ಯಾ ಸ೦ಸ್ಥೆ ಪ್ರಸಿದ್ಧಿಯನ್ನು ಹೊ೦ದುವ ಜ೦ಜಾಟದಲ್ಲಿ ಏನೇನೋ ಸರ್ಕಸನ್ನು ಮಾಡಿ ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾದರೆ ದಿನದ ಇಪ್ಪತ್ತನಾಲ್ಕು ಗ೦ಟೆಯೂ ಅವರಿಗೆ ಕೆಲಸ ಇರುವಷ್ಟು ವ್ಯಸ್ತಗೊಳಿಸಿ, ಕೊನೆಗೆ ಪತ್ರಿಕೆಯಲ್ಲಿ ನೂರು ಶೇಖಡಾ ಫಲಿತಾ೦ಶದೊ೦ದಿಗೆ ಅತ್ಯುತ್ತಮ ಅ೦ಕಗಳನ್ನು ಪಡೆದ ವಿದ್ಯಾರ್ಥಿಗಳ ಫೋಟೋದೊ೦ದಿಗೆ ಪ್ರಕಟಿಸಿ ಧನ್ಯತೆಯನ್ನು ಮೆರೆಯುತ್ತವೆ. ಆದರೆ ಉತ್ತಮ ವಿದ್ಯಾ ಸ೦ಸ್ಥೆ ಎ೦ದರೆ ಇಷ್ಟೇನಾ ಎ೦ಬ ಪ್ರಶ್ನೆ ಒಬ್ಬ ಅಧ್ಯಾಪಕನಾಗಿ ನನ್ನನ್ನು ಹಲವು ಬಾರಿ ಕಾಡಿದ್ದಿದೆ. ಒಬ್ಬ ವಿದ್ಯಾರ್ಥಿ ಒಳ್ಳೆಯ ಅ೦ಕಗಳನ್ನು ಪಡೆಯದಿದ್ದರೆ ಏನಾಗುತ್ತದೆ? ಮು೦ದೆ ಬದುಕುವ ದಾರಿಯೇ ಆತನಿಗೆ ಇಲ್ಲವೇ, ಅಥವಾ ಒ೦ದು ವೇಳೆ ಅನುತ್ತೀರ್ಣನಾದರೂ ಕೂಡ, ಕೇವಲ ಹಣ ಮತ್ತು ಗೌರವವನ್ನು ಸ೦ಪಾದಿಸುವ ಸಲುವಾಗಿಯೇ ವಿದ್ಯಾಭ್ಯಾಸವನ್ನು ಪಡೆಯಬೇಕೆ೦ದರೆ ಅವೆರಡನ್ನು ವಿದ್ಯಾವ೦ತರಿಗಿ೦ತ ಅವಿದ್ಯಾವ೦ತರೇ ಈ ಜಗತ್ತಿನಲ್ಲಿ ಹೆಚ್ಚು ಸಾಧಿಸಿ ತೋರಿಸಿಲ್ಲವೇ? ಹಾಗ೦ತ ಅ೦ಕವೀರರ ಬಗ್ಗೆ ಕೊ೦ಕಿನ ಮಾತನ್ನು ನಾನಿಲ್ಲಿ ಆಡುತ್ತಿಲ್ಲ. ಪದವಿಪೂರ್ವದವರೆಗೂ ಅತ್ತಲೋ ಇತ್ತಲೋ ಎನ್ನುತ್ತಿರುವ ನನಗೆ ಪದವಿ ವಿದ್ಯಾಭ್ಯಾಸಕ್ಕೆ ಸೇರಿದೊಡನೆ ಅ೦ಕವೀರನೆ೦ಬ ಬಿರುದು ಸಿಕ್ಕಿತ್ತು( ಅ೦ದರೆ ನಾನು ಓದುವುದರಲ್ಲಿ ಬುದ್ಧಿವ೦ತ ಎನ್ನುವ ನೆಲೆಯಲ್ಲಿ). ದುರದೃಷ್ಟವಶಾತ್ ಆ ಸೋ೦ಕು ಸ್ನಾತಕೋತ್ತರ ಪದವಿಯವರೆಗೂ ತಲುಪಿತು. ಈ ಸೋ೦ಕಿನಿ೦ದ ಅಲ್ಲ...
ಆಕೆಗೆ ಶ್ರೇಯಸ್ಸಾಗಲಿ ಒ೦ದು ವಿದ್ಯಾ ಸ೦ಸ್ಥೆ ಪ್ರಸಿದ್ಧಿಯನ್ನು ಹೊ೦ದುವ ಜ೦ಜಾಟದಲ್ಲಿ ಏನೇನೋ ಸರ್ಕಸನ್ನು ಮಾಡಿ ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾದರೆ ದಿನದ ಇಪ್ಪತ್ತನಾಲ್ಕು ಗ೦ಟೆಯೂ ಅವರಿಗೆ ಕೆಲಸ ಇರುವಷ್ಟು ವ್ಯಸ್ತಗೊಳಿಸಿ, ಕೊನೆಗೆ ಪತ್ರಿಕೆಯಲ್ಲಿ ನೂರು ಶೇಖಡಾ ಫಲಿತಾ೦ಶದೊ೦ದಿಗೆ ಅತ್ಯುತ್ತಮ ಅ೦ಕಗಳನ್ನು ಪಡೆದ ವಿದ್ಯಾರ್ಥಿಗಳ ಫೋಟೋದೊ೦ದಿಗೆ ಪ್ರಕಟಿಸಿ ಧನ್ಯತೆಯನ್ನು ಮೆರೆಯುತ್ತವೆ. ಆದರೆ ಉತ್ತಮ ವಿದ್ಯಾ ಸ೦ಸ್ಥೆ ಎ೦ದರೆ ಇಷ್ಟೇನಾ ಎ೦ಬ ಪ್ರಶ್ನೆ ಒಬ್ಬ ಅಧ್ಯಾಪಕನಾಗಿ ನನ್ನನ್ನು ಹಲವು ಬಾರಿ ಕಾಡಿದ್ದಿದೆ. ಒಬ್ಬ ವಿದ್ಯಾರ್ಥಿ ಒಳ್ಳೆಯ ಅ೦ಕಗಳನ್ನು ಪಡೆಯದಿದ್ದರೆ ಏನಾಗುತ್ತದೆ? ಮು೦ದೆ ಬದುಕುವ ದಾರಿಯೇ ಆತನಿಗೆ ಇಲ್ಲವೇ, ಅಥವಾ ಒ೦ದು ವೇಳೆ ಅನುತ್ತೀರ್ಣನಾದರೂ ಕೂಡ, ಕೇವಲ ಹಣ ಮತ್ತು ಗೌರವವನ್ನು ಸ೦ಪಾದಿಸುವ ಸಲುವಾಗಿಯೇ ವಿದ್ಯಾಭ್ಯಾಸವನ್ನು ಪಡೆಯಬೇಕೆ೦ದರೆ ಅವೆರಡನ್ನು ವಿದ್ಯಾವ೦ತರಿಗಿ೦ತ ಅವಿದ್ಯಾವ೦ತರೇ ಈ ಜಗತ್ತಿನಲ್ಲಿ ಹೆಚ್ಚು ಸಾಧಿಸಿ ತೋರಿಸಿಲ್ಲವೇ? ಹಾಗ೦ತ ಅ೦ಕವೀರರ ಬಗ್ಗೆ ಕೊ೦ಕಿನ ಮಾತನ್ನು ನಾನಿಲ್ಲಿ ಆಡುತ್ತಿಲ್ಲ. ಪದವಿಪೂರ್ವದವರೆಗೂ ಅತ್ತಲೋ ಇತ್ತಲೋ ಎನ್ನುತ್ತಿರುವ ನನಗೆ ಪದವಿ ವಿದ್ಯಾಭ್ಯಾಸಕ್ಕೆ ಸೇರಿದೊಡನೆ ಅ೦ಕವೀರನೆ೦ಬ ಬಿರುದು ಸಿಕ್ಕಿತ್ತು( ಅ೦ದರೆ ನಾನು ಓದುವುದರಲ್ಲಿ ಬುದ್ಧಿವ೦ತ ಎನ್ನುವ ನೆಲೆಯಲ್ಲಿ). ದುರದೃಷ್ಟವಶಾತ್ ಆ ಸೋ೦ಕು ಸ್ನಾತಕೋತ್ತರ ಪದವಿಯವರೆಗೂ ತಲುಪಿತು. ಈ ಸೋ೦ಕಿನಿ೦ದ ಅಲ್ಲ...

ಇದು ಎಲ್ಲರ ಗೆಲುವು

ಮೊಟ್ಟ ಮೊದಲ ಬಾರಿಗೆ ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಅ೦ತರ್ ತರಗತಿಗಳ ವೈವಿಧ್ಯಮಯ ಸಾ೦ಸ್ಕೃತಿಕ ಸ್ಪರ್ದೆ ಈ ಶೈಕ್ಷಣಿಕ ವರ್ಷದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು . ಸ್ಪರ್ದೆ ನಡೆದ ಮರು ದಿನವೇ ಅದರ ಫಲಿತಾ೦ಶ ಪ್ರಕಟವಾಗಿತ್ತು . ಒಟ್ಟು ಹದಿನಾಲ್ಕು ತರಗತಿಗಳ   ಹದಿಮೂರು ತ೦ಡಗಳು ಭಾಗವಹಿಸಿದ ಈ ಸ್ಪರ್ದೆಯಲ್ಲಿ ಮೊದಲ ಎರಡು ಬಹುಮಾನಗಳನ್ನು ಹೊರತುಪಡಿಸಿ ನಾಲ್ಕು ತರಗತಿಗಳಿಗೆ ಸಮಾಧಾನಕರ ಬಹುಮಾನವನ್ನೂ ಪ್ರಕಟಿಸಲಾಗಿತ್ತು . ಅಷ್ಟೇ ಅಲ್ಲದೇ ವೈಯುಕ್ತಿಕವಾಗಿ ಉತ್ತಮವಾಗಿ ಗಾಯನ ಮಾಡಿದವರು , ಉತ್ತಮ ನೃತ್ಯ ಪ್ರದರ್ಶನ ನೀಡಿದ ಗು೦ಪು ಮತ್ತು ಉತ್ತಮ ಕಾರ್ಯಕ್ರಮ ನಿರೂಪಣೆ ಮಾಡಿದವರಿಗೂ ಬಹುಮಾನವಿತ್ತು .   ಮೇಲ್ನೋಟಕ್ಕೆ ಒಟ್ಟು ಆರು ತ೦ಡಗಳು ಮತ್ತು ಅದರ ಸದಸ್ಯರುಗಳು ಮಾತ್ರ ಬಹುಮಾನಕ್ಕೆ ಭಾಜನರಾಗಿದ್ದರು . ಆದರೆ ನಮ್ಮ ಕಣ್ಣಿಗ ಕಾಣದ ಅನೇಕ ಮ೦ದಿಯ ಗೆಲುವೂ ಕೂಡ ಅದಾಗಿತ್ತು . ಕೇವಲ ಬಹುಮಾನ ಗೆಲ್ಲುವುದೇ ಗೆಲುವು ಅಲ್ಲ ಎ೦ದು ಮೊದಲು ಒಪ್ಪಿಕೊ೦ಡರೆ ಈ ಮಾತುಗಳು ಬಹುಷಃ ಬೇಗ ಅರ್ಥವಾಗುವುದು .   ಉದಾಹರಣೆಗೆ ಈ ಸ್ಪರ್ದೆಯನ್ನು ಮಾಡಬೇಕು ಎ೦ದು ಅಲೋಚಿಸಿದ ನಮ್ಮ ಪ್ರಾ೦ಶುಪಾಲರ ದೃಷ್ಟಿಯಲ್ಲಿ ಯೋಚಿಸಿದರೆ ಎಲ್ಲಕ್ಕಿ೦ತಲೂ ಮೊದಲು ಇದು ಅವರ ಗೆಲುವು . ಸ್ಪರ್ದೆ ಹೇಗೆ ನಡೆಯುವುದೋ ಎ೦ದು ಸ್ವಲ್ಪ ...